ಅಮಾವಾಸ್ಯೆ
ಮಧ್ಯರಾತ್ರಿ ಒಂದು ಗಂಟೆಯಾದರೆ ಸಾಕು ಆ ಊರಲ್ಲಿ ಅದೇನೋ ಶಬ್ದ ಕೇಳಿಸುತ್ತದೆ, ಯಾರೋ ಓಡಾಡಿದಂತೆ
ಕಾಣಿಸುತ್ತದೆ. ಯಾಕೆ.? ಯಾಕೆಂದರೆ ಆ ಊರಲ್ಲಿ ನಡೆಯುವ ಜಾತ್ರೆಯಲ್ಲಿ ನಾಗಮಣಿ ತಂದಿಟ್ಟು ಪೂಜೆ
ಮಾಡಬೇಕು, ಆದರೆ ಅದೆಲ್ಲಿದೆ ಎಂಬುದು ಯಾರಿಗೂ ಗೊತ್ತಿಲ್ಲ ಈಗದಕ್ಕೆ ಪರಿಹಾರ ಏನು? ಹೇಗಾದರೂ
ಮಾಡಿ ನಾಗಮಣಿ ಹುಡುಕಿ ತಂದು ಪ್ರತಿಷ್ಠಾಪಿಸಬೇಕು...? ಮೊದಲೇ ನಾಗಮಣಿ ಜೊತೆಗೆ ಭೂತದ ಕಾಟ ಬೇರೆ
ಎಷ್ಟು ಕಷ್ಟದ ಭಯಾನಕ ಕೆಲಸ ಎಂದುಕೊಂಡರೆ ಅದು ತಪ್ಪು . ಯಾಕೆಂದರೆ ಅದನ್ನು ಹುಡುಕ ಹೊರಡುವ ನಾಯಕ
ಮತ್ತು ಅವನ ಬಳಗ ಮೈ ಮೇಲಿನ ರೋಮವೂ ಕೊಂಕದಂತೆ ಹುಡುಕಿಕೊಂಡು ಬಂದು ಬಿಡುತ್ತಾರೆ. ಹಾಗಾದರೆ ಭಯ
ಪದಬೇಕಾದವರು ಯಾರು? ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡರೆ ಅದಕ್ಕೆ ಪ್ರೇಕ್ಷಕರು ಎನ್ನುವ
ಉತ್ತರ ಬರುತ್ತದೆ. ಅಂದರೆ ನೋದುವಾಗಲಿನ ಭಯವಲ್ಲ, ಇಂತಹ ಚಿತ್ರವನ್ನೇ ನೋಡಲು ಎಂಟೆದೆ ಬೇಕು
ಎಂಬುದು ಅದರ ತಾತ್ಪರ್ಯ.
ಒಂದು
ಹಾರರ್ ಚಿತ್ರ ಎಂದಾಗ ಅದರಲ್ಲಿ ಒಂದಷ್ಟು ಭಯ , ಕತ್ತಲೆ, ಭೂತ ಬಂಗಲೆ ದ್ವೇಷ ಕೊಲೆ ಎಲ್ಲವೂ
ಇರುತ್ತದೆ. ದೆವ್ವ ಭೂತದ ಕಲ್ಪನೆಯೇ ಅಂತಹದ್ದು. ಯಾರನ್ನೋ ಯಾರೋ ಕೊಂದರೆ ಅತೃಪ್ತ ಆತ್ಮ ಕಾಡುತ್ತದೆ
ಎಂಬುದು ಸಧ್ಯದ ಲೋಕ ಲಿಖಿತ ಸತ್ಯ.
ಗಂಟೆ
ಒಂದು ಯಾವುದೋ ಸಿನಿಮಾಶಾಲೆಯ ವಿದ್ಯಾರ್ಥಿಗಳು ತಯಾರಿಸುವ ಪ್ರಾಯೋಗಿಕ ಚಿತ್ರದಂತಿದೆ ಎಂದರೆ
ತಪ್ಪಾಗಲಾರದು. ಒಂದು ಸಿನಿಮಾ ತಯಾರಿಕೆ, ಚಿತ್ರಕತೆ ಮತ್ತು ಅಭಿನಯ ಮುಂತಾದವುಗಳ ಬಗ್ಗೆ
ಎಳ್ಳಷ್ಟೂ ಜ್ಞಾನವಿಲ್ಲದ ಒಂದಷ್ಟು ವ್ಯಕ್ತಿಗಳು ಒಂದೆಡೆ ಸೇರಿದರೆ ಏನಾಗುತ್ತದೆ ಎಂದರೆ ಗಂಟೆ
ಒಂದಾಗುತ್ತದೆ.
ನಾಯಕ
ವಿನಯ್ ಅಭಿನಯಿಸುವ ಗೋಜಿಗೆ ಚಿತ್ರದ ಕೊನೆಯವರೆಗೂ ಹೋಗುವುದೇ ಇಲ್ಲ. ಆತನ ವೇಷ ಭೂಷಣ, ಪಾತ್ರ
ಯಾವುದು ಒಂದು ಚಿತ್ರಕ್ಕೆ ನಿಲುಕುವ ಹಾಗಿಲ್ಲ. ಹಾಗಾಗಿ ಆತನ ಅಭಿನಯವೇ ಚಿತ್ರಕ್ಕಿಂತ ಹೆಚ್ಚು
ಹೆದರಿಸುವ ಅಂಶ. ಹಾಗೆಯೇ ಉಳಿದ ಕಲಾವಿದರಲ್ಲಿ ಕಸುಬುದಾರಿಕೆಯಿಲ್ಲ. ಇದ್ದುದರಲ್ಲಿ ಛಾಯಾಗ್ರಹಣ
ಪರವಾಗಿಲ್ಲ ಎನಿಸಿಕೊಂಡರೆ ಸಂಗೀತ ಮಾತ್ರ ಮತ್ತೂ ಒಂದು ಹೆಜ್ಜೆ ಚಿತ್ರವನ್ನ ಹಿಂದಡಿಯಿಕ್ಕುವಂತೆ
ಮಾಡಿಬಿಟ್ಟಿದೆ.
ಒಟ್ಟಿನಲ್ಲಿ
ಕ್ಯಾಮೆರಾ ಒಂದಿದ್ದರೆ ಸಾಕು ಎಂತಹದ್ದೋ ಒಂದು ಸಿನಿಮಾ ಮಾಡಿದರೆ ಸಾಕು ಯಾರೋ ಒಬ್ಬ ಹೀರೋ ಆದರೆ
ಸಾಕು ಎಂಬೆಲ್ಲವನ್ನೂ ಒಂದೆಡೆ ಸೇರಿಸಿದರೆ ಒಂದು ಗಂಟೆ ಸಿನಿಮಾವಾಗುತ್ತದೆ.
No comments:
Post a Comment