Pages

Friday, January 16, 2015

ಶಬರಿಮಲೆ ಯಾತ್ರೆ

ದೇವರ ಚಿತ್ರಗಳು ಮತ್ತು ದೇವರ ಮಹಿಮೆಯನ್ನು ತೋರಿಸುವ ಚಿತ್ರಗಳು ಆಗಾಗ ಬರುತ್ತಲೇ ಇರುತ್ತವೆ. ಶಬರಿಮಲೆ ಯಾತ್ರೆ ಅಯ್ಯಪ್ಪ ಸ್ವಾಮಿಯ ಮಹಿಮೆಯನ್ನು ತೋರಿಸುವ ಚಿತ್ರ ಎಂಬುದು ಒಂದು ಸಾಲಿನ ವಿಮರ್ಶೆ ಎನ್ನಬಹುದು.
ಬರೀ ಚಿತ್ರವಾಗಿಯಷ್ಟೇ ಸಿನಿಮಾವನ್ನು ನೋಡಿದರೆ ಸಿನಿಮಾ ರುಚಿಸದೆ ಇರಬಹುದು. ಅದಕ್ಕೆ ಕಾರಣವಿದೆ. ಸಿನಿಮಾದಲ್ಲಿ ಅಥವಾ ಸಿನಿಮಾದ ಕತೆಯಲ್ಲಿ ಉಪಕತೆಯಲ್ಲಿ ಎಲ್ಲವೂ ನಿರೀಕ್ಷಿತ. ಅಂದುಕೊಂಡದ್ದು ಆಗುವುದು ಎರಡೂ ಒಂದೇ ಆಗುತ್ತದೆ. ಒಳ್ಳೆಯವರಿಗೆ ಒಳ್ಳೆಯದು ಭಕ್ತರಿಗೆ ಕರುಣೆ ತೋರುವುದು ದೇವರ ಗುಣ ಅಲ್ಲವೇ. ಹಾಗಾಗಿ ಕಷ್ಟದಲ್ಲಿರುವವರಿಗೆ ಏನಾಗುತ್ತದೆ ಎಂಬುದನ್ನು ಯಾರೂ ಕೇಳುವ ಹಾಗಿಲ್ಲ. ಹೇಳುವ ಹಾಗಿಲ್ಲ. ಇಲ್ಲಿ ಅಯ್ಯಪ್ಪನಿದ್ದಾನೆ. ಅವನ ಭಕ್ತರಿದ್ದಾರೆ. ಕತೆ ಸಾಗುತ್ತಾ ಏನಾಗುತ್ತದೆ ಎಂಬ ಕುತೂಹಲ ಹುಟ್ಟಿಸುವುದಿಲ್ಲ. ಬದಲಿಗೆ ಏನಾಗುತ್ತದೆ ಎಂಬುದನ್ನು ಹೇಳುತ್ತಾ ಸಾಗುತ್ತದೆ.
ಇಲ್ಲಿ ಒಂದಷ್ಟು ಜನರ ಗುಂಪಿದೆ. ಎಲ್ಲರಿಗೂ ಅವರದೇ ಆದ ಸಮಸ್ಯೆಗಳಿವೆ. ಅವರೆಲ್ಲಾ ಅಯ್ಯಪ್ಪನ ಮಾಲೆ ಧರಿಸುತ್ತಾರೆ. ಶಬರಿಮಲೆಗೆ ಹೊರಡುತ್ತಾರೆ. ದಾರಿಯಲ್ಲಿ ಸಿಗುವ ದೇವಾಲಯಗಳನ್ನು ದರ್ಶನ ಮಾಡುತ್ತಾರೆ. ಶಬರಿಮಲೆ ತಲುಪಿ ಅಯ್ಯಪ್ಪನ ದರ್ಶನ ಕಂಡು ಮಕರ ಜ್ಯೋತಿ ವೀಕ್ಷಿಸುತ್ತಾರೆ. ಅಲ್ಲಿಗೆ ಶುಭಂ. ಹೌದು ಕತೆ ಎಂದರೆ ಇಷ್ಟೇ ಎನ್ನಬಹುದು. ಚಿತ್ರಕತೆ ಮತ್ತು ಪಾತ್ರಗಳು ಮತ್ತ ಅವುಗಳಿಗೆ ಉಪಕತೆಗಳು ಚಿತ್ರದಲ್ಲಿವೆ. ಒಂದೊಂದು ಸಮಸ್ಯೆಯಿಟ್ಟುಕೊಂಡು ಸಾಗುವ ಭಕ್ತರುಗಳು ಅಯ್ಯಪ್ಪನ ಮಹಿಮೆಯಿಂದಾಗಿ ಬದುಕಿನಲ್ಲಿ ಸುಧಾರಣೆಯಾಗುತ್ತಾರೆ ಎಂಬುದು ಕತೆ.
ಅಯ್ಯಪ್ಪನ ಅಥವಾ ಯಾವುದೇ ದೇವರ ಮಹಿಮೆಯ ಚಿತ್ರ ಎಂದಾಗ ಎಲ್ಲವೂ ಸಿದ್ಧ ಸೂತ್ರದ ಅಡಿಯಲ್ಲಿ ಇರಬೇಕಿಲ್ಲ. ಯಾಕೆಂದರೆ ಇದೊಂದು ಪಯಣದ ಕತೆ. ಹೇಗೆ ಈಗಾಗಲೇ ಪ್ರೀತಿ ಕುರಿತು ಹಲವಾರು ರೋಡ್ ಚಿತ್ರಗಳು ಬಂದಿವೆ. ಉದ್ದಕೂ ಸಾಗುವ ಜರ್ನಿಯಲ್ಲಿ ಹಲವಾರು ವಿಷಯಗಳು ತಮಾಷೆಗಳು ಹಾಗೆಯೇ ಬದುಕಿನ ಸತ್ಯಾಂಶಗಳು ಅರ್ಥವಾಗುತ್ತಾ ಹೋಗುತ್ತವೆಯೋ ಹಾಗೆಯೇ ಈ ಚಿತ್ರವನ್ನು ನಿರೂಪಿಸಿದ್ದರೆ ಚಿತ್ರ ಸಿದ್ಧ ಸೂತ್ರದಿಂದ ಹೊರ ಬರುತ್ತಿತ್ತೇನೋ? ಆದರೆ ಇಲ್ಲಿ ಕತೆಗಾರ ನಿರ್ದೇಶಕರೇ ಚೌಕಟ್ಟು ಹಾಕಿಕೊಂಡಿರುವುದರಿಂದ ಸೀಮಿತವಾಗಿ ಬಿಟ್ಟಿದೆ ಸಿನಿಮ.

ಇದನ್ನು ಬಿಟ್ಟರೆ ಭಕ್ತಿ ಪ್ರಧಾನವಾಗಿದೆ ಚಿತ್ರ. ಹಾಗೆಯೇ ಹಾಡುಗಳು ಕೂಡ ಹೇಳುವಂತಿವೆ. ಅನಿರುದ್ಧ, ಅಮರನಾಥ್ ಆರಾಧ್ಯ, ಗುರುಪ್ರಸಾದ್, ಅಕ್ಷಯ್ ಕುಮಾರ್, ಕುಶಾಲ್ ಪಾತ್ರಕ್ಕೆ ತಕ್ಕಂತೆ ನಟಿಸಿದ್ದಾರೆ.

No comments:

Post a Comment