Add caption |
ಏನಿದು ನಕರ ಎಂಬ ಪ್ರಶ್ನೆಗೆ
ಅಲ್ಲೇ ಉತ್ತರವಿದೆ. ಅದರ ಅಡಿಬರಹದಲ್ಲಿ ಈ ಭೂಮಿಪೂರ ಎಂದಿರುವುದರಿಂದ ಚಿತ್ರವೂ ನಕರ ಎನಿಸಿದರೆ
ಅದನ್ನು ಅನುಭವಿಸಬೇಕೇ ಹೊರತು ಆರೋಪಿಸುವ ಹಾಗಿಲ್ಲ.
ದಕ್ಷ ಪೋಲಿಸ್ ಅಧಿಕಾರಿಯ
ಪಾತ್ರದಲ್ಲಿ ಥ್ರಿಲ್ಲರ್ ಮಂಜು ಕಾಣಿಸಿಕೊಂಡಿದ್ದಾರೆ. ಆದಕ್ಕೆ ಸಾಕ್ಷಿ ಅವರು ಮಾಡುವ ಕೆಲಸ
ಮತ್ತು ಸಮವಸ್ತ್ರ. ಹಾಗಂತ ಅವರ ಕೇಶಶೈಲಿ ಯ ಬಗ್ಗೆ ಮಾತನಾಡುವ ಹಾಗಿಲ್ಲ. ಹೇಳಿದ್ದಾರಲ್ಲ
ಭೂಮಿಪೂರ ನಕರ ಎಂದು.
ಸರಿಬಿಡಿ. ಒಂದಷ್ಟು
ಕಲಾವಿದರಿದ್ದಾರೆ. ಚಿತ್ರೀಕರಿಸಲು ಹಣವಿದೆ ಎಂದಾದ ಮೇಲೆ ನಿರ್ದೇಶಕರು ಏನಾದರೊಂದು
ಮಾಡಬಹುದಿತ್ತೇನೋ..ಆದರೆ ಅವರು ಅದಕ್ಕೆಲ್ಲಾ ತಲೆಕೆಡಿಸಿಕೊಂಡಿಲ್ಲ. ಅದು ನನಗೆ ಬೇಡದ ವಿಷಯ ಎಂದೇ
ನಿರ್ಧರಿಸಿ ಇಷ್ಟ ಬಂದ ಹಾಗೆ ಕ್ಯಾಮೆರಾ ಕಣ್ಣಿಗೆ ಕಂಡದ್ದೆಲ್ಲವನ್ನು ಚಿತ್ರೀಕರಿಸಿ ಪರದೆಗೆ
ಮೆತ್ತಿಬಿಟ್ಟಿದ್ದಾರೆ.ಹಾಗಾಗಿ ಇಲ್ಲಿ ಕತೆ ಚಿತ್ರಕತೆ ಆಶಯ ಉದ್ದೇಶ ಕೇಳಿದವರಿಗೆಲ್ಲಾ ನ’ಕಾರ’ವಿದೆ.
ಒಟ್ಟಿನಲ್ಲಿ ಆಗಾಗ ಈ ತರಹದ
ಚಿತ್ರಗಳು ಬರುತ್ತವೆ. ಹೋಗುತ್ತವೆ. ಅದರಿಂದ ಯಾರಿಗೆ ಲಾಭವಾಗುತ್ತದೆ ಎಂಬುದು ಯಕ್ಷ
ಪ್ರಶ್ನೆಯಾಗುತ್ತದೆ.
ಚಿತ್ರದಲ್ಲಿ ಒಂದಷ್ಟು
ಹೊಡೆದಾಟ ಬಡಿದಾಟ ಹಾಡು ಕುಣಿತ ಎಲ್ಲವೂ ಇದೆ. ಅದೆಲ್ಲವನ್ನೂ ನೋಡಿ ಮಜಾ ಮಾಡಲಾಗದು. ಥ್ರಿಲ್ಲರ್
ಮಂಜು ಪೋಲಿಸ್ ಅಧಿಕಾರಿಯಾಗಿ ಅಬ್ಬರಿಸಿದ್ದಾರೆ. ಒದ್ದು ಗುದ್ದಾಡಿದ್ದಾರೆ. ನಿರ್ಮಾಪಕ ನಿರ್ದೇಶಕ
ರಂಜಿತ್ ಮಂಗಳಮುಖಿಯಾಗಿದ್ದಾರೆ. ಆದರೆ ಅದನ್ನೂ ಸರಿಯಾಗಿ ನಿಭಾಯಿಸಲಾಗಿಲ್ಲ. ಮಿಕ್ಕ ತಾಂತ್ರಿಕ
ಅಂಶಗಳ ಬಗ್ಗೆ ಬರೆಯುವುದು ಏನೂ ಇಲ್ಲ.
ನಿರ್ದೇಶಕ ನಿರ್ಮಾಪಕ ರಂಜಿತ್
ಯಾಕಾಗಿ ಈ ಚಿತ್ರ ನಿರ್ದೇಶನ ಮಾಡಿದ್ದಾರೆ,ಈ ಚಿತ್ರದ ಮೂಲಕ ಏನನ್ನು ಹೇಳಲು ಹೊರಟಿದ್ದಾರೆ
ಎಂಬುದು ಚಿತ್ರ ಮುಗಿದ ಮೇಲೂ ಗೊತ್ತಾಗದ ಅಂಶ ಎನ್ನಬಹುದು.ಒಬ್ಬ [ಳು] ಮಂಗಳ ಮುಖಿ. ಹೆಸರು
ಅಕ್ಕಯ್ಯ. ಈಕೆಯೇನೋ ಅಲ್ಲಲ್ಲಿ ನಿಂತು ಭಿಕ್ಷೆ ಬೇಡುವುದಿಲ್ಲ. ಭೂಗತಲೋಕದ ಅಧಿಪತಿಯಾದ ಅಕ್ಕಯ್ಯನ
ವಿರುದ್ಧ ನಿಲ್ಲುವ ಯುವಕರು, ಈ ಮಧ್ಯದಲ್ಲಿ ಅಪರಾಧಿಗಳನ್ನು ಕಂಡಲ್ಲಿ ಗುಂಡಿಕ್ಕುವ ಪೋಲಿಸ್ ಕತೆ
ಇವರ ನಡುವೆ ಸುತ್ತುತ್ತದೆ. ಹೇಗೆ ಸುತ್ತುತ್ತದೆ ಎಂಬುದನ್ನು ಹೇಳಹೊರಟರೆ ಅದೇ ಕೊರಳಿಗೆ
ಉರುಳಾಗಬಹುದೇನೋ?
No comments:
Post a Comment